ಅರಕಲಗೂಡು ಕ್ರೀಡಾಂಗಣ ಪಕ್ಕದ ಚರಂಡಿ ಕಾಮಗಾರಿ ಕಳಪೆ : ಸಾರ್ವಜನಿಕರ ಆರೋಪ
ಅರಕಲಗೂಡಿನ ಕ್ರೀಡಾಂಗಣ ಬಳಿ ಪಪಂ ಅನುದಾನದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಚರಂಡಿಯಲ್ಲಿ ನೀರು ನಿಂತ್ತಿರುವುದು. ಅರಕಲಗೂಡು : ಪಟ್ಟಣ ಪಂಚಾಯಿತಿ 15ನೇ ಹಣಕಾಸು ಯೊಜನೆಯಡಿ ಪಟ್ಟಣದ ಕ್ರೀಡಾಂಗಣ ಬಳಿ ಮಳೆನೀರು ಹೋಗುವ ಸಲುವಾಗಿ 10ಲಕ್ಷರು ವೆಚ್ಚದಲ್ಲಿ ನಿರ್ಮಿಸಿರುವ ಚರಂಡಿ,ಡೆಕ್ಸ್ಲ್ಯಾಬ್ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕ್ರೀಡಾಂಗಣ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ವವಹಿಸಿರುವ ಕಾರಣ ಮಳೆಗಾಲದಲ್ಲಿ ನೀರು ಹೊರಹೋಗಲು ಸಾಧ್ಯವಾಗದೆ ನಿಂತ್ತಲ್ಲಿಯೆ ನಿಂತ್ತು ಮಲೀನತೆ ಉಂಟುಮಾಡುತಿತ್ತು.ಈ ಸಮಸ್ಯೆ ನಿವಾರಣೆಗೆ ಸ್ಥಳೀಯ ಪಪಂ ಅನುಧಾನದಲ್ಲಿ 200ಮೀ ಅಂತರದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.ಈ ಕೆಲಸ ಪೂರ್ಣಗೊಂಡು ಕೇವಲ ಎರಡು ತಿಂಗಳು ಮುಗಿದಿದ್ದು,ಕಳಪೆಯಿಂದ ಕೂಡಿರುವ ಹಿನ್ನೆಲೆ ನೂತನ ಡೆಕ್ಸ್ಲ್ಯಾಬ್ ಕುಸಿಯುತ್ತಿದೆ ಎಂದು ಕುಮಾರಸ್ವಾಮಿ,ಚಂದ್ರೇಗೌಡ ಆರೋಪಿಸಿದ್ದಾರೆ. ಚರಂಡಿ ಕಾಮಗಾರಿಯನ್ನು ನಿಯಮಾನುಸಾರ ಕೈಗೊಂಡಿದ್ದರೇ ಮಳೆಯ ನೀರು ಸರಾಗವಾಗಿ ಹರಿಯುತಿತ್ತು.ಅವೈಜ್ಞಾನಿಕ,ಕಳಪೆ ಹಾಗೂ ನ್ಯೂನ್ಯತೆಯಿಂದ ಕೂಡಿರುವುದರಿಂದ ನೂತನ ಚರಂಡಿಯಲ್ಲಿಯೆ ನೀರು ನಿಂತ್ತು ಮಲೀನತೆ ಹರಡುತ್ತಿದೆ.ಅಲ್ಲದೆ ಕಾಂಕ್ರಿಟ್ ಚರಂಡಿ ತಡೆಗೋಡೆಯನ್ನು ಕೈಯಿಂದ ಕೆರೆದರೆ ಮಣ್ಣು ರೀತಿ ಉದುರುತ್ತಿದೆ.ಇದರಿಂದ ಲಕ್ಷಾಂತರರೂ ತೆರಿಗೆ ಹಣ ಪೋಲಾಗಿದೆ.ಕಾಮಗಾರಿಯನ್ನು ಹೊಸದಾಗಿ ಗುಣಮಟ್ಟದಿಂದ ಮಾಡಿಸಬೇಕು.ಇಲ್ಲವಾದರ